ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೆಂಬರ್ 21: ಈ ದಿನ, ಅಂದು

1 min read

ನವೆಂಬರ್ 21: ಈ ದಿನ, ಅಂದು –  ಡಾ.ಕೆ.ಚಂದ್ರಶೇಖರನ್ ರವರ ಜನ್ಮದಿನ

Dr. K. Chandrasekharan photo
  • 1920ರ ನವೆಂಬರ್ 21ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬಾಪಟ್ಲದಲ್ಲಿ ಜನಿಸಿದರು.
  • ಭಾರತದಲ್ಲಿ ಸ್ವಾತಂತ್ರದ ನಂತರದ ಗಣಿತದ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
  • ಗಣಿತದಲ್ಲಿ ಅವರ ಆಸಕ್ತಿಗಳು ವಿಶ್ಲೇಷಣೆ ಮತ್ತು ವಿಶ್ಲೇಷಣಾ ಸಂಖ್ಯಾ ಸಿದ್ಧಾಂತದ ಸುತ್ತ ಕೇಂದ್ರೀಕೃತವಾದವು.
  • ಇವರು ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿ.ಐ.ಎಫ್.ಆರ್ ) ನಲ್ಲಿ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ್ ನ ಸಂಸ್ಥಾಪಕರು
  • 20ನೇ ಶತಮಾನದ ಪ್ರಮುಖ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರಾದ ಇವರು, ಟಿ.ಐ.ಎಫ್.ಆರ್ ಅನ್ನು ಗಣಿತದ ವಿಶ್ವಪ್ರಸಿದ್ಧ ಕೇಂದ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ನವೆಂಬರ್ 21: ಈ ದಿನ, ಅಂದು –  ಬಿಸಿ ಗಾಳಿಯ ಬಲೂನು :- ಮೊದಲ ಮಾನವ ಸಹಿತ ಹಾರಾಟ

  • 1783ರ ನವೆಂಬರ್ 21ರಂದು ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಮಾಂಟ್ ಗೋಲ್ಫೈಯರ್ ಸಹೋದರರು ಕಾಗದ ಮತ್ತು ರೇಷ್ಮೆಯಿಂದ ತಯಾರಿಸಿದ ಬಿಸಿ ಗಾಳಿಯ ಬಲೂನು ಮೊದಲ ಮಾನವ ಸಹಿತ ಹಾರಾಟ ನಡೆಸಿತು.
  • ಬಲೂನ್ ನಲ್ಲಿ ಫ್ರಾಂಕೋಯಿಸ್ ಪಿಲಾತ್ರ್ ಡಿ ರೋಜಿಯರ್ ಮತ್ತು ಅರ್ಲ್ಯಾಂಡರ್ಸ್ ನ ಮಾರ್ಕ್ವಿಸ್ ಎಂಬ ಇಬ್ಬರು ವ್ಯಕ್ತಿಗಳು ಪ್ರಯಾಣಿಸಿದರು
  • ಈ ಹಾರಾಟದಲ್ಲಿ ಬಲೂನ್ ಸುಮಾರು 500 ಅಡಿ ಎತ್ತರವನ್ನು ತಲುಪಿದಲ್ಲದೆ 51/2 ಮೈಲುಗಳ ಪ್ರಯಾಣ ನಡೆಸಿ 25 ನಿಮಿಷಗಳ ನಂತರ ಸುರಕ್ಷಿತವಾಗಿ ಧರೆಗಿಳಿಯಿತು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content