- ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕನ್ನಡದಲ್ಲಿ ಜನಪ್ರಿಯಗೊಳಿಸಲು ಅತ್ಯುನ್ನತ ಕೊಡುಗೆಯನ್ನು ನೀಡಿರುವ ಹಿರಿಯ ವಿಜ್ಞಾನ ಸಂವಹನಕಾರರನ್ನು ಗುರುತಿಸಿ ಅಕಾಡೆಮಿಯು ಕನ್ನಡಲ್ಲಿ ನಡೆಸುವ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಅಕಾಡೆಮಿಯ ಸಂಪಾದಕ ಮಂಡಳಿ ಸಮಿತಿಯು ಪ್ರತಿವರ್ಷ ಆಗಸ್ಟ್ ವೇಳೆಗೆ ಕಾರ್ಯಕಾರಿ ಸಮಿತಿಯ ಪರಿಗಣನೆಗೆ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
- ಆಯ್ಕೆಯಾದ ಸಂವಹನಕಾರರಿಗೆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಚಿನ್ನದ ಪದಕ, ರೂ. 1.00 ಲಕ್ಷಗಳ ನಗದು ಪುರಸ್ಕಾರ ಮತ್ತು ಉಲ್ಲೇಖ ಫಲಕ ನೀಡಿ ಗೌರವಿಸಲಾಗುವುದು.
- ಪ್ರಶಸ್ತಿ ಪುರಸ್ಕೃತರನ್ನು ವಾರ್ಷಿಕ ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತದೆ ಮತ್ತು ಅವರು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣವನ್ನು ಮಾಡುತ್ತಾರೆ. ಸಮಾರಂಭದಲ್ಲಿ ಭಾಗವಹಿಸಲು ಅವರಿಗೆ ವಸತಿ ವ್ಯವಸ್ಥೆ ಮತ್ತು ವಿಮಾನ ಪ್ರಯಾಣ (ಎಕಾನಮಿ ದರ್ಜೆ) ಅಥವಾ ಪ್ರಥಮ ದರ್ಜೆ ರೈಲು ಪ್ರಯಾಣ ದರವನ್ನು ನೀಡಲಾಗುವುದು

ಡಾ. ಹೆಚ್. ಆರ್. ಕೃಷ್ಣಮೂರ್ತಿ
ಹೆಸರಾಂತ ವಿಜ್ಞಾನ ಬರಹಗಾರರು / ನಿವೃತ್ತ ಹೆಚ್ಚುವರಿ ಮಹಾ ನಿರ್ದೇಶಕರು, ಆಕಾಶವಾಣಿ