ಅಕಾಡೆಮಿಯ ವತಿಯಿಂದ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ವಿಜ್ಞಾನ, ಗಣಿತ ಮತ್ತು ಸಂಬಂಧಿತ ವಿಷಯಗಳ ಮೇಲೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.
ಉದ್ದೇಶಗಳು
- ಕರ್ನಾಟಕದ ಗ್ರಾಮೀಣ ಪ್ರದೇಶದ ಶಿಕ್ಷಕರು ವಿಜ್ಞಾನ, ಗಣಿತ ಮತ್ತು ಸಂಬಂಧಿತ ವಿಷಯಗಳಲ್ಲಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸುವುದು.
- ವಿಜ್ಞಾನ ಬೋಧನೆ ಮತ್ತು ಸಂವಹನದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಜಾಗೃತಿ ಮೂಡಿಸುವುದು
- ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ಸಂಪನ್ಮೂಲ ತಜ್ಞರು ಮತ್ತು ಶಿಕ್ಷಕರ ಜಾಲ ವ್ಯವಸ್ಥೆಯನ್ನು ಸ್ಥಾಪಿಸುವುದು
- ಗ್ರಾಮೀಣ ಪ್ರದೇಶಗಳಲ್ಲಿರುವ ಶಿಕ್ಷಕರಿಗೆ ತರಬೇತಿ ನೀಡಲು ಮಾರ್ಗದರ್ಶಕ ವ್ಯವಸ್ಥೆಯನ್ನು ರೂಪಿಸುವುದು
ಸಂಪನ್ಮೂಲ ತಜ್ಞರು
- ಈ ಕಾರ್ಯಾಗಾರವನ್ನು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಶಾಲೆಗಳು/ಸಂಸ್ಥೆಗಳು ನಡೆಸಬಹುದಾಗಿದ್ದು, ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ.
- ವಿಜ್ಞಾನ, ಗಣಿತ ಮತ್ತು ಸಂಬಂಧಿತ ವಿಷಯಗಳಲ್ಲಿ ಬೋಧಿಸುತ್ತಿರುವ ಗ್ರಾಮೀಣ ಪ್ರದೇಶದ ಶಿಕ್ಷಕರನ್ನು ಗುರುತಿಸುವುದು, ಒಂದು ಬಾರಿಗೆ ಒಂದು ಜಿಲ್ಲಾ
- ಮಾಹಿತಿ ಮತ್ತು ಸಂವಹನ ಸಾಧನಗಳ ಮೂಲಕ ಕನ್ನಡ ಮಾಧ್ಯಮದಲ್ಲಿ ಸಂಪನ್ಮೂಲ ತಜ್ಞರು, ಶಿಕ್ಷಣ ತಜ್ಞರು, ನುರಿತ ಶಿಕ್ಷಕರಿಂದ ತಾಲೂಕು ಮಟ್ಟದ ಶಾಲೆಯಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ನಡೆಸುವುದು.
- ಆಯಾ ಕ್ಷೇತ್ರಗಳಲ್ಲಿ 10-15 ಸಂಪನ್ಮೂಲ ತಜ್ಞರನ್ನು ಗುರುತಿಸಿ, ಅವರಲ್ಲಿ 8 ತಜ್ಞರನ್ನು ಅವರ ಲಭ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿ ಉಪನ್ಯಾಸ ನೀಡಲು ಆಹ್ವಾನಿಸಲಾಗುವುದು.
- ಒಂದು ಜಿಲ್ಲೆಯಿಂದ ಒಂದು ಬಾರಿಗೆ 50 ಸಂಖ್ಯೆಗೆ ಮೀರದಂತೆ ಗ್ರಾಮೀಣ ಪ್ರದೇಶದ ಆಯ್ದ ಶಾಲೆಗಳ ಶಿಕ್ಷಕರು ಭಾಗವಹಿಸುವರು
ಮೌಲ್ಯಮಾಪನ
- ಕಾರ್ಯಾಗಾರಗಳ ಕೊನೆಯಲ್ಲಿ ಸಂಪನ್ಮೂಲ ತಜ್ಞರಿಂದ ಪಡೆದ (ತಲಾ 8-10 ಪ್ರಶ್ನೆಗಳು) ಬಹು ಆಯ್ಕೆ ರಸಪ್ರಶ್ನೆಯೊಂದಿಗೆ ಒಂದು ಗಂಟೆ ಕಾಲದ ಪರೀಕ್ಷೆಯಿಂದ ಶಿಭಿರಾರ್ಥಿಗಳ ಮೌಲ್ಯಮಾಪನ
- ಅಂಕಗಳ ದಾರದ ಮೇಲೆ ಆಯ್ಕೆ ಮಾಡಿದ ಮೊದಲ ನಾಲ್ಕು ಶಿಕ್ಷಕರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಲಾಗುತ್ತದೆ; ಪ್ರಥಮ: ರೂ 3,000/-; ದ್ವಿತೀಯ: ರೂ 2,000/-; ತೃತೀಯ (ಇಬ್ಬರಿಗೆ): ತಲಾ ರೂ 1,000/-
- ಉಪನ್ಯಾಸ ಮಾಲೆ/ಕಾರ್ಯಾಗಾರದಲ್ಲಿ ಭಾಗವಹಿಸಿದ್ದರ ಪ್ರಮಾಣಪತ್ರವನ್ನು ಪಡೆಯಲು ಕನಿಷ್ಠ ಅಂಕಗಳನ್ನು ಪಡೆಯಬೇಕು.
ಆಡಳಿತ / ಆಯವ್ಯಯ
- ಶಾಲೆಗಳಲ್ಲಿ/ರೋಟರಿ ಕ್ಲಬ್ ಅಥವಾ ಅದೇ ರೀತಿಯ ಇತರೆ ಸಂಸ್ಥೆಗಳಲ್ಲಿ 2 ದಿನಗಳ ಕಾರ್ಯಾಗಾರಕ್ಕೆ ರೂ. 1.25 ಲಕ್ಷ (ಅತಿಥೇಯ ಸಂಸ್ಥೆಯ ಕೊಡುಗೆ ನಿರೀಕ್ಷಿಸಿದೆ) ಸಂಪನ್ಮೂಲ ತಜ್ಞರ ಗೌರವಧನ, ಲೇಖನ ಸಾಮಾರ್ಗಿ, ಪ್ರಯಾಣ, ಊಟ-ಉಪಹಾರ, ಬಹುಮಾನ, ಆಡಿಟ್ ಶುಲ್ಕ, ಇತ್ಯಾದಿ ಸೇರಿ.
- ಕಾರ್ಯಕ್ರಮದ ನೋಡಲ್ ಅಧಿಕಾರಿಯು ಕಾರ್ಯಕ್ರಮ ವೇಳಾಪಟ್ಟಿ ಮತ್ತು ಸಂಪನ್ಮೂಲ ತಜ್ಞರ ಪಟ್ಟಿಯನ್ನು ಅಕಾಡೆಮಿಯಿಂದ ಅನುಮೋದನೆಯನ್ನು ಪಡೆಯಬೇಕು. ಒಂದು ಉಪನ್ಯಾಸ 90 ನಿಮಿಷಗಳು ಮತ್ತು ರೂ. 2,000/- ಗೌರವ ಸಂಭಾವನೆ. ಒಂದು ಕಾರ್ಯಕ್ರಮದಲ್ಲಿ ಒಬ್ಬ ತಜ್ಞರು ಗರಿಷ್ಠ ಎರಡು ಉಪನ್ಯಾಸಗಳನ್ನು ನೀಡಬಹುದು. ನೋಡಲ್ ಅಧಿಕಾರಿಗೆ ರೂ 5,000/- ಗಳ ಗೌರವ ಸಂಭಾವನೆ
- ಕಾರ್ಯಕ್ರಮ ಪೂರ್ಣಗೊಂಡ ನಂತರ ನೋಂದಾಯಿತ ಲೆಕ್ಕ ಪರಿಶೋಧಕರಿಂದ ದೃಢೀಕರಿಸಿದ ಲೆಕ್ಕಪರಿಶೋಧನೆಯ ವರದಿಯನ್ನು ಸೂಕ್ತ ಛಾಯಾಚಿತ್ರಗಳು ಮತ್ತು ಕಾರ್ಯಕ್ರಮ ವರದಿಯ ಸಮೇತ ಒಂದು ತಿಂಗಳ ಒಳಗಾಗಿ ಸಲ್ಲಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿರುವವರಿಂದ ಪ್ರತಿಕ್ರಿಯೆಗಳನ್ನು ಸಹ ಒದಗಿಸಬಹುದು
- ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಗೊಳಿಸಲು, ಅಕಾಡೆಮಿಯ ಪೂರ್ವಾನುಮತಿಯೊಂದಿಗೆ, ಆತಿಥೇಯ ಸಂಸ್ಥೆಗಳು ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಿಕೊಳ್ಳಬಹುದಾಗಿದೆ.
- ಅಕಾಡೆಮಿಯು ಕಾರ್ಯಕ್ರಮವನ್ನು ಬಾಹ್ಯ ಸಂಸ್ಥೆಯಿಂದ ಮೌಲ್ಯಮಾಪನವನ್ನು ಕೈಗೊಳ್ಳುವುದು, ಆ ಸಮಯದಲ್ಲಿ, ಆತಿಥೇಯ ಸಂಸ್ಥೆಗಳು/ನೋಡಲ್ ಅಧಿಕಾರಿಗಳು ಕಾರ್ಯಕ್ರಮದ ಅಗತ್ಯ ಮಾಹಿತಿ ಮತ್ತು ಪರಿಣಾಮದ ಬಗ್ಗೆ ಮಾಹಿತಿ ಒದಗಿಸುವುದು