ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ (ಅಕಾಡೆಮಿ) ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾಗಿದೆ. ಅಕಾಡೆಮಿಯು ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ, ಪದ್ಮ ವಿಭೂಷಣ ಪುರಸ್ಕೃತರಾದ ಪ್ರೊ. ಯು. ಆರ್. ರಾವ್, ಇಸ್ರೋ ಮಾಜಿ ಅಧ್ಯಕ್ಷರು ಮತ್ತು ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳು ಇವರ ಅಧ್ಯಕ್ಷತೆಯಲ್ಲಿ 2005ರಲ್ಲಿ ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಾಗುವ ಬೆಳವಣಿಗೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಹಾಗೂ ವಿಜ್ಞಾನವನ್ನು ವಿವಿಧ ಶೈಕ್ಷಣಿಕ ಹಂತಗಳಲ್ಲಿ ಪ್ರೋತ್ಸಾಹಿಸುವುದು ಅಕಾಡೆಮಿಯ ಪ್ರಮುಖ್ಯ ಉದ್ದೇಶವಾಗಿದೆ. ಅಕಾಡೆಮಿಯು ಕರ್ನಾಟಕಾದ್ಯಂತ ವಿಜ್ಞಾನ ಶಿಕ್ಷಣ ವಿಜ್ಞಾನ ಸಂವಹನ ಮತ್ತು ಇತರೆ ಪ್ರೊತ್ಸಾಹಕ ಚಟುವಟಿಕೆಗಳನ್ನು ನಡೆಸುವಲ್ಲಿ ಮುಂಚೂಣಿಯಲ್ಲಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಕ್ಷೇತ್ರದಲ್ಲಿ ಅಕಾಡೆಮಿಯು ಮಾಡಿರುವ ಸಾಧನೆಗಳನ್ನು ಗುರುತಿಸಿ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿಯಲ್ಲಿರುವ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (NCSTC) ಯು 2022ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದೆ.
ಕರ್ನಾಟಕ ರಾಜ್ಯದಲ್ಲಿ ನಮ್ಮ ಯೋಜನೆಗಳನ್ನು ಮುಂದುವರಿಸಲು ಮತ್ತು ವಿಸ್ತರಿಸಲು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೋತ್ಸಾಹಿಸುವತ್ತ ನಮ್ಮ ಮುನ್ನಡೆಗಳನ್ನು ಸಹಕರಿಸಲಿಚ್ಚಿಸುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಕಾರ್ಪೊರೇಟ್ ಘಟಕಗಳಿಂದ ದಾನಗಳನ್ನು ಅಕಾಡೆಮಿಯು ಸ್ವೀಕರಿಸುತ್ತದೆ. ನಿಮ್ಮ ಉದಾರ ದೇಣಿಗೆಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸಮುದಾಯಗಳನ್ನು ಪ್ರೇರೇಪಿಸಲು, ಶಿಕ್ಷಣ ನೀಡಲು ಮತ್ತು ಸಶಕ್ತಗೊಳಿಸಲು ಸಹಾಯ ಮಾಡುತ್ತದೆ.
ತೆರಿಗೆ ವಿನಾಯಿತಿ
ಅಕಾಡೆಮಿಗೆ ಭಾರತ ಸರ್ಕಾರವು ಶೇ. 50 ರಷ್ಟು ತೆರಿಗೆ ವಿನಾಯಿತಿ ನೀಡಿದ್ದು, ದೇಣಿಗೆ ನೀಡುವವರು ಆದಾಯ ತೆರಿಗೆ ಕಾಯಿದೆ 1961 ರಡಿಯಲ್ಲಿಯ 80G, Clause (ii) of 2nd proviso to Sec.80G(5) ರಲ್ಲಿ ಶೇ. 50 ರಷ್ಟು ವಿನಾಯಿತಿ ಪಡೆಯಬಹುದಾಗಿದೆ.
ದೇಣಿಗೆ ನೀಡುವುದು ಹೇಗೆ?
ದೇಣಿಗೆಗಳು ಚೆಕ್, ಡಿಡಿ ಅಥವಾ ನೇರವಾಗಿ ಅಕಾಡೆಮಿಯ ಕೆಳಕಂಡ ಬ್ಯಾಕ್ ಖಾತೆಗೆ ಕಳುಹಿಸಿಕೊಡಬಹುದಾಗಿದೆ:
A/c Name : Karnataka Science and Technology Academy
Bank : State Bank of India
A/c No. : 64001018807
IFSC : SBIN0009045
Branch : Vidyaranyapura
