
ಡಾ.ಎ.ಎಂ.ರಮೇಶ್
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಅಂಚೆ ವಿಳಾಸ:
#523/41, 3ನೇ ಅಡ್ಡ ರಸ್ತೆ
10ನೇ ಮುಖ್ಯರಸ್ತೆ, ಬನಶಂಕರಿ 1ನೇ ಹಂತ
ಬೆಂಗಳೂರು – 560070
ಮೊಬೈಲ್: 9845258894
ಇಮೇಲ್ : ramesh.aquatic@gmail.com ; ramesh_aquatic@yahoo.co.in
ವಿದ್ಯಾರ್ಹತೆ
1987 ರಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ B.F.Sc (ಬ್ಯಾಚುಲರ್ ಆಫ್ ಫಿಶರೀಸ್ ಸೈನ್ಸ್) ಪದವಿ, 1989 ರಲ್ಲಿ M.F.Sc (ಮಾಸ್ಟರ್ ಆಫ್ ಫಿಶರೀಸ್ ಸೈನ್ಸ್) ಪದವಿ ಮತ್ತು 1995ರಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಜಲ ವಿಜ್ಞಾನದಲ್ಲಿ ಪಿಎಚ್.ಡಿ.
ಡಿಪ್ಲೊಮಾ ಮತ್ತು ತರಬೇತಿ ಕೋರ್ಸ್ ಗಳು:
- ಐಸಿಎಫ್ಎಐ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಜರ್ನಲಿಸಂ (ಜನವರಿ 2010)
- ಇಗ್ನೊದಿಂದ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪ್ರಮಾಣಪತ್ರ (2010)
- ಯುನೈಟೆಡ್ ನೇಷನ್ಸ್ ಇನ್ಸ್ಟಿಟ್ಯೂಟ್ ಫಾರ್ ಟ್ರೈನಿಂಗ್ ಅಂಡ್ ರಿಸರ್ಚ್ ನೀಡುವ ಅಂತರರಾಷ್ಟ್ರೀಯ ಪರಿಸರ ಕಾನೂನಿನಲ್ಲಿ ಡಿಪ್ಲೊಮಾ ಕೋರ್ಸ್ (2011)
ಅಂತರರಾಷ್ಟ್ರೀಯ ಫೆಲೋಶಿಪ್ ಗಳು:
- ಮೀನುಗಾರಿಕೆ ನಿರ್ವಹಣೆಯಲ್ಲಿ ಅಂತರರಾಷ್ಟ್ರೀಯ ತರಬೇತಿ, ಅಂತರರಾಷ್ಟ್ರೀಯ ಕೃಷಿ ಕೇಂದ್ರ, ನೆದರ್ಲ್ಯಾಂಡ್ಸ್, 2002.
- ಸಾಗರ ನಿರ್ವಹಣೆಯಲ್ಲಿ ಅಂತರರಾಷ್ಟ್ರೀಯ ತರಬೇತಿ – ಇಂಟರ್ನ್ಯಾಷನಲ್ ಓಷಿಯನ್ ಇನ್ಸ್ಟಿಟ್ಯೂಟ್, ಡಾಲ್ಹೌಸಿ ವಿಶ್ವವಿದ್ಯಾಲಯ, ಕೆನಡಾ, 2006.
ವೃತ್ತಿಪರ ಅನುಭವ
ಡಿಸೆಂಬರ್ 16, 1992 ರಿಂದ ಡಿಸೆಂಬರ್ 31, 1994 ರವರೆಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಜಲ ಜೀವಶಾಸ್ತ್ರ ವಿಭಾಗದಲ್ಲಿ ಪರಿಸರ ಮೇಲ್ವಿಚಾರಣಾ ಯೋಜನೆಯಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಜನವರಿ 1, 1995 ರಿಂದ ಜನವರಿ 10, 1996 ರವರೆಗೆ ಕರ್ನಾಟಕದ ಕಾರವಾರದಲ್ಲಿರುವ ಖಾಸಗಿ ಟೈಗರ್ ಸೀಗಡಿ ಹ್ಯಾಚರಿ (ಪೆನಿಯಸ್ ಮೊನೊಡಾನ್) ಯಲ್ಲಿ ತಾಂತ್ರಿಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಣೆ.
ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಜಲ ಜೀವಶಾಸ್ತ್ರ ವಿಭಾಗದಲ್ಲಿ ಪರಿಸರ ನಿರ್ವಹಣೆ ಯೋಜನೆಯಲ್ಲಿ ಸಂಶೋಧನಾ ಸಹಾಯಕರಾಗಿ ಜನವರಿ 10, 1996 ರಿಂದ ಮಾರ್ಚ್ 31, 1998 ರವರೆಗೆ ಕಾರ್ಯ ನಿರ್ವಹಿಸಿದ್ದಾರೆ.
ಏಪ್ರಿಲ್ 1, 1998 ರಿಂದ ಸೆಪ್ಟೆಂಬರ್ 30, 2000 ರವರೆಗೆ ಕಾರವಾರದ ಟೈಗರ್ ಸೀಗಡಿ ಫಾರ್ಮ್ ನಲ್ಲಿ (ಪೆನಿಯಸ್ ಮೊನೊಡಾನ್) ಸಲಹೆಗಾರರಾಗಿ ಕಾರ್ಯ ನಿರ್ವಹಣೆ.
ಏಪ್ರಿಲ್ 2, 2001 ರಿಂದ ಡಿಸೆಂಬರ್ 31, 2002 ರವರೆಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಕೆಯ ಅಂಗ ಸಂಸ್ಥೆಯಾಗಿದ್ದ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್ಆರ್ಎಸ್ಎಸಿ) ದಲ್ಲಿ ಯೋಜನಾ ವಿಜ್ಞಾನಿಯಾಗಿ ಸೇರಿ ಕರಾವಳಿ ವಲಯ ನಿರ್ವಹಣೆ, ಮೀನುಗಾರಿಕೆ ಮತ್ತು ಪರಿಸರ ನಿರ್ವಹಣೆ ಮತ್ತು ಜಲ ಸಂಪನ್ಮೂಲ ಸಂಬಂಧಿಸಿದ ಯೋಜನೆಗಳನ್ನು ನಿರ್ವಹಿಸಿದ್ದಾರೆ
ಜನವರಿ 2003 ರಿಂದ ಮೇ 2007 ರವರೆಗೆ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ಸಲಹೆಗಾರ ವಿಜ್ಞಾನಿಯಾಗಿ ಕರ್ನಾಟಕದ ಸಮಗ್ರ ಕರಾವಳಿ ವಲಯ ನಿರ್ವಹಣೆ, ಕರಾವಳಿ ನಿಯಂತ್ರಣ ವಲಯದೊಳಗೆ ಭೂ ಬಳಕೆಯ ನಕ್ಷೆ, ಜಲ ಸಂಪನ್ಮೂಲ ನಿರ್ವಹಣೆ ಮತ್ತು ಮೀನುಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಸಂಯೋಜಿಸಿದರು. ಸೆಪ್ಟೆಂಬರ್ 2004 ರಿಂದ ಮೇ 2007 ರವರೆಗೆ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ಜಿಯೋಇನ್ಫರ್ಮ್ಯಾಟಿಕ್ಸ್ ನಲ್ಲಿ M.Tech ಕೋರ್ಸ್ನ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮೇ 2007 ರಿಂದ ಏಪ್ರಿಲ್ 2018 ರವರೆಗೆ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಲ್ಲಿ (ಕೆಎಸ್ ಟಿಎ) ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿದ್ದರು. ಇಸ್ರೋದ ಮಾಜಿ ಅಧ್ಯಕ್ಷರು, ಭಾರತ ಸರ್ಕಾರದ ಅಂತರಿಕ್ಷಾ ವಿಭಾಗದ ಕಾರ್ಯದರ್ಶಿಗಳಾಗಿದ್ದ ಪದ್ಮವಿಭೂಷಣ ಪ್ರೊ.ಯು.ಆರ್.ರಾವ್ ಅವರ ಅಧ್ಯಕ್ಷತೆಯಲ್ಲಿ ಕೆಎಸ್ ಟಿ ಎ ಯನ್ನು ಸ್ಥಾಪಿಸಲಾಗಿತ್ತು. ವಿವಿಧ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ತರಬೇತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಸಮ್ಮೇಳನಗಳ ಮೂಲಕ ವಿವಿಧ ಶೈಕ್ಷಣಿಕ ಹಂತಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.
2018ರ ಏಪ್ರಿಲ್ ನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬಡ್ತಿ ಪಡೆದರು. ಅಂದಿನಿಂದ, ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಅದರ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬೆಂಬಲದೊಂದಿಗೆ ಮೇಲ್ವಿಚಾರಣೆ ಮತ್ತು ಸಮನ್ವಯಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳು, ಬೋಧನಾ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಒಳಗೊಂಡಂತೆ ಪ್ರೌಢ ಶಾಲೆಯಿಂದ ವಿಶ್ವವಿದ್ಯಾಲಯ ಮಟ್ಟದವರೆಗಿನ ಇಡೀ ಶೈಕ್ಷಣಿಕ ಹಂತಗಳನ್ನು ವ್ಯಾಪಿಸಿದೆ. ಇವರ ಮುಂದಾಳತ್ವದಲ್ಲಿ ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ಸಮ್ಮೇಳನಗಳು ಮತ್ತು ನೂರಾರು ತರಬೇತಿ ಕಾರ್ಯಾಗಾರಗಳು ಮತ್ತು ವೆಬಿನಾರ್ ಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.
ಇವರ ಅಧಿಕಾರಾವಧಿಯಲ್ಲಿ, 2022 ರಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯಿಂದ ವಿಜ್ಞಾನ ಸಂವಹನಕ್ಕೆ ಅತ್ಯುತ್ತಮ ಕೊಡುಗೆಗಳಿಗಾಗಿ ಅಕಾಡೆಮಿಗೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇವರು ಹೆಸರಾಂತ ವೈಜ್ಞಾನಿಕ ನಿಯತಕಾಲಿಕಗಳಲ್ಲಿ ಅನೇಕ ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ನಿಯತಕಾಲಿಕೆಗಳು ಮತ್ತು ಸುದ್ದಿ ದಿನಪತ್ರಿಕೆಗಳಲ್ಲಿ ಇವರ ಅನೇಕ ಜನಪ್ರಿಯ ಲೇಖನಗಳು ಪ್ರಕಟಗೊಂಡಿವೆ.